ತೀರ್ಥಹಳ್ಳಿ ಇಂದ 18km ದೂರದಲ್ಲಿದೆ. ಇಲ್ಲಿ ನೋಡಲು ಇರುವುದು "ಕವಿಮನೆ" ಮತ್ತು "ಕವಿಶೈಲ" .
ಪ್ರವೇಶ ಶುಲ್ಕ - 5 Rs
’ಫೋಟೊ ತೆಗೆಯಲು ಮನೆಯ ಒಳಗೆ ಅವಕಾಶವಿಲ್ಲ’
ಊಟಕ್ಕೆ, ಉಳಿಯಲು ಹೋಟೆಲ್ ಇಲ್ಲ. ಸಣ್ಣ ಟೀ ಅಂಗಡಿ ಇದೆ. ತೀರ್ಥಹಳ್ಳಿಯಲ್ಲಿ ಉಳಿಯಬಹುದು.
"ಕವಿಮನೆ" -
ಕುವೆಂಪು ಅವರನ್ನು ಹುಟ್ಟಿ, ಬೆಳೆಸಿ ಕನ್ನಡಕ್ಕೆ ಕೊಡುಗೆಯಾಗಿ ನೀಡಿದ ಮನೆ - ಕವಿಮನೆ . ಈಗ ಸರಕಾರ ಕುವೆಂಪು ಅವರ ಸಾಧನೆಯ ಪ್ರತೀಕವಾಗಿ ಕವಿಮನೆಯನ್ನು ಸ್ಮಾರಕವಾಗಿ ಪರಿವರ್ತಿಸಿದೆ. ಇದುವರೆಗೂ ನಾನು ನೋಡಿರುವ ಅತೀ ಸುಂದರ ಮನೆ ಕವಿಮನೆ. ಜಿಟಿ ಜಿಟಿ ಮಳೆ, ಹಚ್ಚ ಹಸಿರು,ಹೂವು, ಕೊಳ, ಬೆಟ್ಟ ಗುಡ್ಡಗಳ ನಡುವೆ ಇರುವ ಈ ಮನೆ ನೋಡಲು ಬಹಳ ಸುಂದರ.
"ಕವಿಶೈಲ" -
"ಆನಂದಮಯ ಈ ಜಗಹೃದಯ... "ನಿಜಕ್ಕೂ ಈ ಸಾಲುಗಳು ಇಂತಹ ಸ್ಥಳದಿಂದ ಬಂದಿರುವುದು, ಕುವೆಂಪುರವರು
ಕವಿಶೈಲಕ್ಕೆ ನ್ಯಾಯ ದೊರಕಿಸಿರುವುದನ್ನು ತೋರಿಸುತ್ತದೆ. ಕವಿಶೈಲ ಕುವೆಂಪುರವರ ಕಾವ್ಯಲೋಕದ ಪ್ರೇರಣೆ. ಕವಿಶೈಲ ನಿಸರ್ಗದ ಅವಿಸ್ಮರಣೀಯ ನೋಟ. ಕವಿಶೈಲದಲ್ಲಿ ಅವರ ಸಮಾಧಿ ಇದೆ. ಅವರ ನೆನಪಿಗಾಗಿ ಈ ಸುಂದರ ಸ್ಥಳದಲ್ಲಿ ಸ್ಮಾರಕಗಳನ್ನು ಮಾಡಲಾಗಿದೆ .